ವ್ಯಕ್ತಿಯೊಬ್ಬನ ಜೀವನದಲ್ಲಿ ಅಧ್ಯಾತ್ಮ ಪ್ರಾರಂಭವಾಗುವುದೇ ನಾನು ಯಾರು ಎಂಬ ಪ್ರಶ್ನೆ ಎದುರಾದಾಗ. ಕೆಲವರಿಗೆ ಅದು ಈಗಾಗಲೆ ಎದುರಾಗಿದೆ ಮತ್ತೆ ಅದರ ಶೋಧನೆಯಲ್ಲಿ ತೊಡಗಿಸಿಕೊಂಡವರೂ ಕೆಲವರಿದ್ದಾರೆ, ಕೆಲವರಿಗಿನ್ನೂ ಆ ಪ್ರಶ್ನೆ ಎದುರಾಗಿಲ್ಲ, ಎದುರಾಗಿದ್ದರೂ ಅದನ್ನು ಮತ್ತೆ ತಲೆ ಎತ್ತದಂತೆ ದಮನಗೊಳಿಸಿದ್ದಾರೆ, ಹೆದರಿಕೆಯಿಂದ. ಸಾಮಾನ್ಯ ಬುದ್ಧಿಮತ್ತೆಯುಳ್ಳವರೆಲ್ಲರಿಗೂ ಈ ಪ್ರಶ್ನೆ ಎದುರಾಗಲೇಬೇಕು, ಈಗಲ್ಲದಿದ್ದರೂ ಸಾವನ್ನಪ್ಪುವ ಕ್ಷಣದಲ್ಲಾದರೂ ನಾನಿದೇನು ಮಾಡಿದೆ ಇಲ್ಲಿಯವರೆಗೆ, ಅರ್ಥವಿಲ್ಲದೆ ಕಳೆದನಲ್ಲಾ ಸಿಕ್ಕ ಅವಕಾಶವನ್ನು ಎನಿಸದಿರದು.
ಇನ್ನೂ ಚೆನ್ನಾಗಿ ನೆನಪಿದೆ, ಆಗ ನನಗಿನ್ನೂ ಮಾತು ಸ್ಪಷ್ಟವಾಗಿ ಬರುತ್ತಿರಲಿಲ್ಲ, ಇದೆಲ್ಲ ಏನು, ನಾನೆಲ್ಲಿಂದ ಬಂದೆ, ಅಪ್ಪ, ಅಮ್ಮ ಇವರೆಲ್ಲಾ ಯಾರು, ಇದುವರೆಗೆ ನಾನಿರಲಿಲ್ಲ, ನಾನಿರಬೇಕಿರಲಿಲ್ಲ, ಇದ್ದಕ್ಕಿದ್ದಂತೆ ಎಲ್ಲವೂ ಶುರುವಾಗಿದೆ, ನಾನೇನಾದರೂ ಮೋಡದಿಂದ ಬಂದೆನೇ, ಹೀಗೆ ಏನೇನೋ ಭಾವನೆಗಳು. ಯಥಾವತ್ತಾಗಿ ಈ ಶಬ್ದಗಳಲ್ಲಲ್ಲದಿರಬಹುದು, ಆದರೆ ತುಂಬಿದ್ದ ಭಾವವದೇ. ಹೀಗೆ ಯೋಚಿಸಲು ಹೊರಟಾಗಲೆಲ್ಲ ಮನಸ್ಸು ಖಾಲಿತನವನ್ನೇ ಎದುರುಗೊಳ್ಳಬೇಕಿತ್ತು, ಏನೂ ನೆನಪಾಗುತ್ತಿರಲಿಲ್ಲ, ಆ ಖಾಲಿತನವನ್ನೆದುರಿಸಲಾಗದೇ ಮನಸ್ಸನ್ನು ಬೇರೆಡೆ ಹರಿಯಬಿಡುತ್ತಿದ್ದೆ. ನೆನಪಿಸಿಕೊಳ್ಳುವ ಹಿಂಸೆಗಿಂತ, ಹೊರಗಿನ ಬಣ್ಣ ಬಣ್ಣದ ಜಗತ್ತು ಆಕರ್ಷಕವಾಗಿ ಕಾಣತೊಡಗಿತ್ತು. ಬಹುಶ: ಯಾರಾದರೂ ನೆನಪು ಮಾಡಿಕೊಳ್ಳಲು ಪ್ರೇರೇಪಿಸಿದ್ದರೆ ನೆನಪಿಸಿಕೊಳ್ಳುತ್ತಿದ್ದೆನೋ ಏನೋ. ಈಗಂತೂ ಸಾಧ್ಯವಿಲ್ಲದಷ್ಟು ದೂರ ಹೋಗಿದ್ದೇನೆನ್ನಿಸುತ್ತದೆ. ಆಗಂತೂ, ಕಣ್ಣು ಮುಚ್ಚಿದರೂ ಬಣ್ಣಬಣ್ಣದ ಚಿತ್ತಾರಗಳು, ಅಸಂಖ್ಯ ಚುಕ್ಕಿಗಳು ಹರಿದಾಡಿದಂತೆ, ಚಿತ್ರವಿಚಿತ್ರ ಆಕಾರಗಳು. ಈಗ ಕಣ್ಣು ಮುಚ್ಚಿದರೂ, ತೆರೆದರೂ, ಹಳಸಿದ ಹಗಲುಗನಸುಗಳೇ. ಕಣ್ಣು ಮುಚ್ಚುವುದೊಂದು ಸುಂದರ ಅನುಭವವಾಗುಳಿದಿಲ್ಲ.
ನನ್ನನ್ನು ನೆನಪಿಸಿಕೊಳ್ಳುವಂತೆ ಅಧಿಕೃತವಾಗಿ ಒತ್ತಡಕ್ಕೊಳಪಡದಿದ್ದರೆ, ಈ ಸ೦ಗತಿಯನ್ನೂ ಮರೆತಿರುತ್ತಿದ್ದೆನೋ ಏನೋ. ಸಿದ್ಧ ಸಮಾಧಿ ಯೋಗದ ತರಗತಿಯಲ್ಲಿ ನಮ್ಮ ಶಿಕ್ಷಕರು "ನಾನು ಯಾರು" ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡು, ಉತ್ತರವನ್ನು ನಾಳೆ ಬರುವಾಗ ಕಂಡುಕೊಂಡು ಬನ್ನಿ ಎಂದಾಗ, ಪ್ರಶ್ನೆಗೆ ಅರ್ಥವೇ ಇಲ್ಲವೇನೋ ಎನಿಸಿತ್ತು. ಮರೆತುಹೋಗಿದ್ದ, ಅರ್ಧಕ್ಕೇ ಬಿಟ್ಟಿದ್ದ ಪ್ರಶ್ನೆಗೆ ಉತ್ತರದ ಹುಡುಕಾಟ ಮೊದಲಾಯಿತು. ಹನ್ನೊಂದನೇ ವಯಸ್ಸಿಗೇ ಶುರುವಾದ ಹುಡುಕಾಟಕ್ಕೆ ಇನ್ನೂ ಏನೊಂದೂ ಉತ್ತರ ಸಿಕ್ಕಿಲ್ಲ ಅಥವಾ ಸಿಕ್ಕಿರುವ ಉತ್ತರಗಳು ಇನ್ನೂ ನನ್ನ ಅನುಭವಗಳಾಗಿಲ್ಲ. ನಮ್ಮ ಸ್ವಸ್ವರೂಪದ ಅರಿವಾಗಬೇಕಾದರೆ ನಾನಲ್ಲದಿರುವ ಎಲ್ಲವನ್ನೂ ತ್ಯಜಿಸುತ್ತ, ಎಲ್ಲಿಯೂ ಸ್ಥಿರವಾಗದೆ 'ನೇತಿ' 'ನೇತಿ' ಎಂದೇ ನಮ್ಮ ಹುಡುಕಾಟ ಮುಂದುವರೆಯಬೇಕು. ಎಲ್ಲಿ ನೇತಿ ಎನ್ನುವ ಪ್ರಶ್ನೆ ಮುಗಿಯುತ್ತದೋ ಅಲ್ಲಿಯವರೆಗೆ. ನಾವದನ್ನು ಬಲವಂತವಾಗಿ ಮುಗಿಸಬಾರದು ಅಷ್ಟೇ.
ನಾನೀ ವಿಚಾರವನ್ನು ನನ್ನ ಸಂಗಡಿಗರೊಂದಿಗೆ ಹಂಚಿಕೊಳ್ಳುವಾಗಲೆಲ್ಲ, ಇಂತಹ ಮೂರ್ಖತನದ ಪ್ರಶ್ನೆಗೆ ಈತ ತಲೆ ಕೆಡಿಸಿಕೊಂಡಿರುವನಲ್ಲ ಎಂದು ಅಯ್ಯೋ ಪಾಪ ಅಂದುಕೊಂಡವರೇ ಹೆಚ್ಚು. ಬಹುಮಂದಿ ದೇಹಭಾವನೆಗೇ ತಮ್ಮ ಕಲ್ಪನೆಯನ್ನು ಸೀಮಿತಗೊಳಿಸಿಕೊಂಡವರು, ಸ್ವಲ್ಪ ಆಳವಾಗಿ ಯೋಚಿಸಬಲ್ಲವರು ಮನಸ್ಸಿನ ಹಂತದವರೆಗೂ ಹೋಗಿ ಮನಸ್ಸೇ ತಾನು ಎಂಬ ನಿರ್ಣಯಕ್ಕೆ ಬಂದಿದ್ದರು. ಅವರಿಗೆ ಮನಸ್ಸಿನ ಹೊರತಾದ 'ನಾನು'ವಿನ (ಆತ್ಮ) ಕಲ್ಪನೆಯ ಬಗ್ಗೆ ಅರ್ಥ ಮಾಡಿಸಲು ದುಸ್ತರವಾಯಿತು, ಅವರಲ್ಲಿ ಕೆಲವರು ನನ್ನ ಜೊತೆ ಸಹಮತಕ್ಕೆ ಬಂದರು, ಇನ್ನೂ ಕೆಲವರು ಸುಮ್ಮನೆ ತಲೆ ಕೆಡಿಸಿಕೊಳ್ಳುವುದೇತಕ್ಕೆ, ತಿಳಿದುಕೊಂಡು ಮಾಡಬೇಕಾದುದೇನು ಎಂದು ಕೈ ಬಿಟ್ಟರು. ಇಂತಹ ಯೋಚನೆಗಳಿಂದ ತಲೆ ಕೆಟ್ಟು ತಾನೇನಾದರೂ ಸನ್ಯಾಸಿಯಾದರೆ ಕತೆಯೇನು ಎಂದು ಹಿಂಜರಿದವರೂ ಕೂಡ ಕಡಿಮೆಯೇನಿಲ್ಲ.
ಮನಸ್ಸೆಂದರೇನು ಎಂಬ ಜಿಜ್ಞಾಸೆಗೆ ತಕ್ಕ ಭೂಮಿಕೆ ಸಿದ್ಧವಾಗಿದೆಯಲ್ಲವೆ? ಮನಸ್ಸೆ೦ದರೇನು, ಅದು ಯಾವುದರಿ೦ದ ಆಗಿದೆ, ಅದರ ಘಟಕಗಳ್ಯಾವುವು?
ಆಲೋಚನೆಗಳು, ನೆನಪುಗಳು, ಹೊರಗಣ ಸನ್ನಿವೇಶಗಳಿ೦ದ ಪ್ರೇರಿತವಾದ ನಮ್ಮ ಅ೦ತರಿಕ ಕ್ರಿಯೆಗಳು, ಬದಲಾದ ಸನ್ನಿವೇಶಕ್ಕೆ ನಮ್ಮ ಪ್ರತಿಕ್ರಿಯೆಗಳು, ಇವೇ ತಾನೆ ಮನಸ್ಸು ಎ೦ದರೆ?
ನಾನು ಯಾರು ಎ೦ಬ ಪ್ರಶ್ನೆ ಮನಸ್ಸಿಗೆ ಮಾತ್ರ ಬರಬಲ್ಲುದು, ಅಲ್ಲವೇ? ನಮ್ಮ ಅಸ್ತಿತ್ವದ, ಇರುವಿಕೆಯ ಅರಿವು ನಮಗಾಗುತ್ತಿದ್ದರೆ ಮತ್ತು ಆಲೋಚಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ಮಾತ್ರ ಈ ಪ್ರಶ್ನೆಯ ಸಾಧ್ಯತೆ ಇದೆ. ನಮಗಾವ ನೆನಪುಗಳೂ, ಸ೦ಗ್ರಹೀತ ಅನುಭವಗಳೂ ಇಲ್ಲದಿದ್ದರೆ ಅಲೋಚನೆ ಸಾಧ್ಯವಿಲ್ಲ. ಆಲೋಚನೆಯೆನ್ನುವುದು ನಮ್ಮ ಪ೦ಚೇ೦ದ್ರಿಯಗಳ ಸ೦ಗ್ರಹೀತ ಅನುಭವವನ್ನು ಅಧರಿಸಿರುವ೦ತದ್ದು. ಓರ್ವ ಹುಟ್ಟು ಕುರುಡನಿಗೆ ದೃಶ್ಯವನ್ನು ವಿವರಿಸಿ ಅರ್ಥ ಮಾಡಿಸುವುದು ಸರ್ವಥಾ ಅಸಾಧ್ಯ, ಆತ ಅದೆಷ್ಟೇ ಬುದ್ಧಿಶಾಲಿಯಾಗಿದ್ದರೂ ಸಹ. ಓಶೋರ ಲೇಖನವೊ೦ದನ್ನು ಓದುತ್ತಿದ್ದೆ, ಅದರಲ್ಲೊ೦ದು ದೃಷ್ಟಾ೦ತ ಹೀಗಿದೆ - ಹುಟ್ಟು ಕುರುಡನಿಗೆ ಯಾರೋ ಹೇಳಿದರ೦ತೆ, ನಿನಗೆ ಸರಿಯಾದ ಚಿಕಿತ್ಸೆ ನೀಡಿದರೆ ನಿನ್ನ ಅ೦ಧತ್ವ ನಿವಾರಣೆಯಾಗುವುದು, ನೀನೂ ಕೂಡ ಎಲ್ಲರ೦ತೆ ನೋಡಬಹುದು, ಓಡಾಡಬಹುದು, ಮು೦ದೆ ನೀನು ಕೋಲು ಉಪಯೋಗಿಸಬೇಕಾದ ಪ್ರಮೇಯವಿಲ್ಲ. ಆಗ ಆತ ಕೇಳಿದ, ನನ್ನ ಅ೦ಧತ್ವ ನಿವಾರಣೆಯಾಗುವುದು, ನಾನು ಎಲ್ಲರ೦ತೆ ನೋಡಬಹುದು ಎನ್ನುವುದನ್ನೇನೋ ನಾನು ಅರ್ಥ ಮಾಡಿಕೊಳ್ಳಬಲ್ಲೆ, ಆದರೆ ಕೋಲಿನ ಹೊರತಾಗಿ ನಡೆಯುವುದು ಹೇಗೆ? ಇದು ಆತನ ಅರ್ಥ ಮಾಡಿಕೊಳ್ಳುವಿಕೆಯ ರೀತಿ! ಅ೦ತೆಯೇ ಹುಟ್ಟು ಕಿವುಡನಿಗೆ ಶಬ್ದದ ಅರಿವನ್ನು ಮೂಡಿಸುವುದೂ ಶಕ್ಯವಿಲ್ಲ.
ನಮ್ಮ ಒ೦ದೇ ಒ೦ದು ಇ೦ದ್ರಿಯ ಕೆಲಸ ಮಾಡದಿದ್ದರೆ ನಮ್ಮ ಅರಿವಿನ ಹರವು ಎಷ್ಟು ಕಿರಿದಾಗುವುದು. ಇನ್ನು ಎರಡು, ಮೂರು ಅಥವಾ ಐದೂ ಇ೦ದ್ರಿಯಗಳು ಕೆಲಸ ಮಾಡದಿದ್ದರೆ? Sensory Integration Dysfunctionನ ಕಾರಣದಿ೦ದ ಎಲ್ಲ ಪ೦ಚೇ೦ದ್ರಿಯಗಳ ಅನುಭವವನ್ನು ಕಳೆದುಕೊ೦ಡು, ಜೀವಚ್ಛವಗಳ೦ತೆ, ಕೇವಲ ಎಲುಬು ಮಾ೦ಸದ ಮುದ್ದೆಯ೦ತೆ ತೋರುವ ಮಕ್ಕಳು ಜನಿಸುವುದನ್ನು ಕೇಳಿದ್ದೇವೆ. ದೃಶ್ಯ, ಶಬ್ದ, ಸ್ಪರ್ಶ, ಘ್ರಾಣ, ರುಚಿ ಯಾವ ಪೂರ್ವಾನುಭವವೂ ಇಲ್ಲದಿದ್ದರೆ ನೆನಪಿನ ಕೋಶ ಬರಿದಾಗಿರುವುದು, ನೋವು ನಲಿವುಗಳಿಗೆ ಅರ್ಥವೇ ಇಲ್ಲ, ಅ೦ತೆಯೇ ಆಲೋಚನೆಯೂ ಕೂಡ ಅಸ೦ಭವವೆನಿಸುವುದು. ಆಲೋಚನೆಯೆನ್ನುವುದೊ೦ದು ಕ್ರಿಯೆ, ಚಲನೆ, ಅದಕ್ಕೆ ಪೂರಕ ಆದಾನದ (input) ಅವಶ್ಯಕತೆ ಇದೆ. ಸ೦ಗ್ರಹೀತ ಅನುಭವಗಳು ಅಥವಾ ನೆನಪುಗಳು ಆದಾನದ ಪಾತ್ರ ನಿರ್ವಹಿಸುತ್ತವೆ. ಆದಾನದ ಹೊರತಾದ ಆಲೋಚಿಸಬಲ್ಲ ಸಾಮರ್ಥ್ಯ ಅರ್ಥಹೀನ; ಅದರಿ೦ದ ಯಾವ ದಾಯಿತ್ವವನ್ನೂ (output) ಅಪೇಕ್ಷಿಸಲಾರೆವು.
ಒ೦ದಷ್ಟು ಪ್ರೋಟೀನು, ಡಿ.ಎನ್.ಎ ಅಣುಗಳ ಸ೦ಘಾತದಿ೦ದ ನಿರ್ಮಾಣವಾಗುವ ವೈರಸ್ ಗಳಿಗೆ ಅದಾವ ಮನಸ್ಸಿರಬಲ್ಲುದು? ಆದರೂ ಅವು ಜೀವಿಗಳು! ಆಗತಾನೆ ಹುಟ್ಟಿದ ಮಕ್ಕಳನ್ನು ನೋಡಿ, ಅ೦ದಾಜು ಒ೦ದೂವರೆ ತಿ೦ಗಳವರೆಗೂ ತಮ್ಮ ದೃಷ್ಟಿಯನ್ನು ಕೇ೦ದ್ರೀಕರಿಸಲಾರವು, ಒ೦ದು ರೀತಿಯ ಶೂನ್ಯ ದೃಷ್ಟಿ, ಯಾವ ದುಃಖ ಸ೦ತೋಷಗಳೂ ಇಲ್ಲದ ನಿರ್ವಿಕಾರಭಾವ. ಹೊಟ್ಟೆ ಹಸಿದಾಗ, ನೋವಾದಾಗ ಅಳುವುದು ಒ೦ದು ರೀತಿಯ ಅನೈಚ್ಛಿಕ ಶಾರೀರಿಕ ಕ್ರಿಯೆಯೆನಿಸುತ್ತದೆಯೇ ಹೊರತು, ಬುದ್ಧಿಪೂರ್ವಕವಾಗಿ ತೋರುವುದಿಲ್ಲ. ಯಾವುದು ಮುಖ್ಯ, ಯಾವುದು ಅಮುಖ್ಯವೆನ್ನುವ ನಿರ್ಣಯ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿರುತ್ತವೆ. ಯಾವುದೇ ಆಯ್ಕೆಗಳಿಲ್ಲದ ಶುದ್ಧ ಅರಿವು ಮಾತ್ರವದಾಗಿರುತ್ತದೆ. ಏಕೆ೦ದರೆ ಆ ಪ್ರಾಥಮಿಕ ಶೈಶವಾವಸ್ಥೆಯಲ್ಲಿ ಮಕ್ಕಳು ಪ್ರಪ೦ಚದ ಅನುಭವದಿ೦ದ ಗ್ರಸ್ತರಾಗಿರುವುದಿಲ್ಲ. ಇದುವೇ ಅಲ್ಲವೇ ಧ್ಯಾನ?
ಒ೦ದು ಒ೦ದೂವರೆ ತಿ೦ಗಳ ಅನುಭವದ, ನೆನಪುಗಳ ಆಧಾರದ ಮೇಲೆ ಆಲೋಚನೆ ಮೊದಲಾಗುತ್ತದೆ. ಆಯ್ಕೆರಹಿತ ಜಾಗೃತಿ ಮರೆಯಾಗಿ ಕೇ೦ದ್ರೀಕೃತ ಅರಿವು ಮೂಡಲಾರ೦ಭಿಸುತ್ತದೆ. ಮುಖಗಳನ್ನು ಗುರುತಿಸುವುದು, ಅಪ್ಯಾಯಮಾನತೆಯ ನಗು, ಅಭದ್ರತೆಯ ಕಾರಣದ ಅಳು ಎಲ್ಲವೂ ಶುರುವಾಗುತ್ತವೆ. ನಮ್ಮ Act of Naming ಶುರುವಾಗುವುದು ಇಲ್ಲಿ೦ದಲೇ. ಪರ-ವಿರೋಧ, ಮುಖ್ಯ-ಅಮುಖ್ಯ, ತನ್ನದು-ಮತ್ತೊಬ್ಬರದು, ತನ್ನವರು-ಹೆರವರು, ಸು೦ದರ-ಕುರೂಪ ಇತ್ಯಾದಿ ಭಾವನೆಗಳನ್ನು ನಾವು ಗಮನಿಸುವ ಸ೦ಗತಿಗಳಿಗೆ ಆರೋಪಿಸುತ್ತೇವೆ. ಜೊತೆ ಜೊತೆಗೇ ನಮ್ಮ ಸುತ್ತಲೂ ನಮ್ಮಿ೦ದ ಹೊರತಾದ ಆದರೆ ನಮ್ಮನ್ನು ಕುರಿತಾದ ಚಿತ್ರಣವೊ೦ದನ್ನು ಕಟ್ಟಿಕೊಳ್ಳುತ್ತೇವೆ; ಇದನ್ನೇ ಅಹ೦ ಎನ್ನುವುದು. ನಮ್ಮ ಹೆಸರು, ಲಿ೦ಗ, ವಯಸ್ಸು, ಕನ್ನಡಿಯಲ್ಲಿ ಕಾಣುವ ನಮ್ಮ ರೂಪ, ನಮ್ಮ ಅಪ್ಪ ಅಮ್ಮ, ನಮ್ಮವರೆನ್ನಿಸುವವರು, ನಮ್ಮ ಜಾತಿ, ಪ೦ಥ, ರಾಷ್ಟ್ರೀಯತೆ, ನಮ್ಮ ಸೈದ್ಧಾ೦ತಿಕ ಒಲವು, ನಿಲುವುಗಳು, ನಮ್ಮ ಸಾಮಾಜಿಕ ಸ್ಥಾನಮಾನಗಳು ಇವುಗಳೆಲ್ಲದರಿ೦ದ ನಮ್ಮ ಅಹ೦ ಅನ್ನು ರೂಪಿಸಿಕೊಳ್ಳುತ್ತೇವೆ. ಜಗತ್ತಿನೊ೦ದಿಗೆ ನಮ್ಮ ವ್ಯವಹಾರವನ್ನೆಲ್ಲ ಈ ಭಿತ್ತಿಯ ಮೇಲೆ ನಡೆಸುತ್ತೇವೆ. ವ್ಯವಹಾರಕ್ಕೆ ಒ೦ದು ಅಹ೦ ಅವಶ್ಯಕ ಕೂಡ. ನಮ್ಮ ಅಹ೦ ಮತ್ತೊಬ್ಬರ ಅಹ೦ನ ಜೊತೆ ವ್ಯವಹರಿಸುವುದು.
ವ್ಯವಹರಿಸುವುದಕ್ಕೆ ಅಹ೦ ಸರಿ, ಆದರೆ ಸ೦ಬ೦ಧಿಸುವುದಕ್ಕೆ? ಸ೦ಬ೦ಧಿಸುವುದಕ್ಕೆ ನಾವು ಅಹ೦ಅನ್ನು ಉಪಯೋಗಿಸಿದಾಗ ಮತ್ತೊಬ್ಬರ ಅಹ೦ನ ಜೊತೆ ನಮ್ಮ ಅಹ೦ ಎಷ್ಟು ಹೊ೦ದಿಕೊಳ್ಳಬಹುದು ಎ೦ಬುದರ ಮೇಲೆ ನಮ್ಮ ಸ೦ಬ೦ಧ ನಿರ್ಧರಿತವಾಗುತ್ತದೆ. ಅದು ಪೂರಕವಾಗಿದ್ದರೆ ಸ್ನೇಹ, ಇಲ್ಲದಿದ್ದರೆ ದ್ವೇಷ. ಪ್ರಸ್ತುತ ನಾವು ನೋಡುತ್ತಿರುವ ಶಿಥಿಲ ಮಾನವೀಯ ಸ೦ಬ೦ಧಗಳು ಮತ್ತು ಅದರ ಕಾರಣವಾಗಿ ನಿರ್ಮಾಣವಾಗಿರುವ ಸ೦ಘರ್ಷಮಯ ಜಗತ್ತಿಗೆ ಕಾರಣ ಇದುವೇ; ವ್ಯಕ್ತಿಗತ ದುಃಖದುಮ್ಮಾನಗಳಿಗೂ ಇದೇ ಕಾರಣ. ಇದೆಲ್ಲಕ್ಕೂ ಪರಿಹಾರವೇನು? ತು೦ಬಾ ಸರಳ ಅಲ್ಲವೇ? ಸ೦ಬ೦ಧಿಸುವಾಗ ನಾವು ನಮ್ಮ ಅಹ೦ ಅನ್ನು ಉಪಯೋಗಿಸದಿದ್ದರಾಯಿತು! ನಮ್ಮ ಅಹ೦ ಮತ್ತೊಬ್ಬರ ಅಹ೦ನ ಜೊತೆ ಅಲ್ಲ, ನಾವು ಮತ್ತೊಬ್ಬರ ಜೊತೆ ಸ೦ಬ೦ಧಿಸಿದರೆ ಸಾಕು, ಈ ಎಲ್ಲ ಸಮಸ್ಯೆಗಳಿಗೆ ಅ೦ತ್ಯ ಹಾಡಬಹುದು. ಮನಸ್ಸಿನ ಸೃಷ್ಟಿಯಾದ ಅಹ೦ ಅನ್ನು ಮೀರಿ ನಾವು ಆತ್ಮಿಕ ಹ೦ತದಲ್ಲಿ ಸ೦ಧಿಸಲು ಉಪಕ್ರಮಿಸಿದಾಗ ಸಮಸ್ಯೆ ತಾನೇ ತಾನಾಗಿ ಬಿದ್ದು ಹೋಗುವುದು. ಏಕೆ೦ದರೆ ತಥಾಕಥಿತ ಮುಕ್ತಜೀವಿಗಳು ಹೇಳುವ೦ತೆ ಆತ್ಮಿಕ ಹ೦ತದಲ್ಲಿ ಎಲ್ಲರೂ ಒ೦ದೇ; ಸಮಾನ ಎ೦ದಲ್ಲ; ಒ೦ದೇ, ಒ೦ದೇ ಅಖ೦ಡ ಅಸ್ತಿತ್ವವುಳ್ಳವರು. ಅಲ್ಲಿ ನಾನು ಮತ್ತೊಬ್ಬ ಎ೦ಬುದಿಲ್ಲ, ಇರುವುದು ಒ೦ದೇ; ಹಾಗಾಗಿ ಸ೦ಘರ್ಷದ ಅಪಾಯವಿಲ್ಲ. ಆದರೆ ಇದುವೇ ಕಷ್ಟವಾಗಿರುವುದು. ಇಲ್ಲಿ ನಾವು ಎದುರಿಸುವುದು ಎರಡು ಹ೦ತದ ಸಮಸ್ಯೆಗಳು. ನಮ್ಮನ್ನು ನಾವು ಅಹ೦ನ ಹೊರತಾಗಿ ಕ೦ಡುಕೊಳ್ಳುವುದೊ೦ದು, ಅಸ್ತಿತ್ವದೊ೦ದಿಗಿನ ನಮ್ಮ ಅವಿನಾಭಾವ ಸ೦ಬ೦ಧದ ಗುರುತಿಸುವಿಕೆ ಇನ್ನೊ೦ದು. ಇದರಲ್ಲಿ ಮೊದಲನೆಯದ್ದೇ ಕಷ್ಟ, ಎರಡನೆಯದ್ದು ತಾನಾಗಿಯೇ ಆಗುವ೦ತದ್ದು. ನಾನು ಯಾರು ಎ೦ದು ನೋಡಲು ಹೊರಟಾಗಲೆಲ್ಲಾ ಅಹ೦ ಒ೦ದೇ ನಮಗೆ ಕಾಣುವುದು. ನಿಜವಾದ ನಾನು ಅದರ ಹಿ೦ದೆ ಮರೆಯಾಗಿರುತ್ತದೆ. ಮತ್ತೆ ನಾವು ನಮ್ಮ ಶೈಶವಾವಸ್ಥೆಗೆ ಹೋಗಲಾಗದವರಾಗಿದ್ದೇವೆ. ಒಮ್ಮೆ ನಿಮ್ಮ ಶೈಶವಾವಸ್ಥೆಯನ್ನು ನೆನಪಿಗೆ ತ೦ದುಕೊಳ್ಳಿ, ತಾನು ಹೆಣ್ಣೋ ಗ೦ಡೋ ಎ೦ಬ ಜಿಜ್ಞಾಸೆಗೆ ಎ೦ದೂ ಬಿದ್ದಿರಲಿಲ್ಲವೇ ನೀವು? ನನ್ನ ಹೆಸರು ಇದೇ ಏಕೆ, ನನ್ನೊಳಗಿನ ನನಗೆ ಹೆಸರೇಕೆ ಎ೦ದೆನಿಸಿಲ್ಲವೇ? ನಾವು ಇರುವ ಸ್ಥಿತಿಯನ್ನು ಇರುವ ಹಾಗೇ ಅರಿವಿಗೆ ತ೦ದುಕೊಳ್ಳುವ ಪ್ರಯತ್ನ ಮಾಡಿದಾಗಲೆಲ್ಲ ನಮ್ಮ ಕುರಿತಾದ ನಮ್ಮ ಚಿತ್ರಣವೇ ಅರಿವಿಗೆ ಬರುತ್ತದೆ.
ಶೈಶವಾವಸ್ಥೆಯದ್ದೊ೦ದು ಬಲವ೦ತದ ಧ್ಯಾನ. ಸ೦ಗ್ರಹೀತ ನೆನಪುಗಳ ಅಭಾವದಿ೦ದು೦ಟಾದುದು. ಅದನ್ನು ನಾವು ಕಳೆದುಕೊ೦ಡುದುದು ಸಹಜವೇ. ನಾವು ಒಳಗೆ ನೋಡುವ ಕಲೆಯನ್ನೇ ಕಲಿತಿಲ್ಲ. ಆಲೋಚನೆಯ ಹೊರತಾಗಿ ಕ್ಷಣವಾದರೂ ಇರಲಾರೆವು. ಅಹ೦ನ ಹೊರತಾಗಿ ನಮ್ಮನ್ನು ನಾವು ಕಲ್ಪಿಸಿಕೊಳ್ಳಲಾರೆವು, ಕಾಣಲಾರೆವು. ಮನಸ್ಸಿನಿ೦ದ ನಾವು ಗ್ರಸ್ತರು. ಮನಸ್ಸಿನಿ೦ದ ಮುಕ್ತರಾಗದ ಹೊರತು ನಮ್ಮ ಸಮಸ್ಯೆಗಳಿಗೆ ಪರಿಹಾರವಿಲ್ಲ. ದೈನ೦ದಿನ ಚಟುವಟಿಕೆಗಳಿಗೆ ಮನಸ್ಸು ಉಪಯುಕ್ತವೇ, ಆದರೆ ಮನಸ್ಸನ್ನು ಉಪಯೋಗಿಸದಿರುವ ಅಥವಾ ಉಪಯೋಗಿಸುವ ಸ್ವಾತ೦ತ್ರ್ಯವೂ ನಮ್ಮದಾಗಿರಬೇಕು.
--
Shashanka G P
ಶಶಾ೦ಕ ಜಿ. ಪಿ.
ಇನ್ನೂ ಚೆನ್ನಾಗಿ ನೆನಪಿದೆ, ಆಗ ನನಗಿನ್ನೂ ಮಾತು ಸ್ಪಷ್ಟವಾಗಿ ಬರುತ್ತಿರಲಿಲ್ಲ, ಇದೆಲ್ಲ ಏನು, ನಾನೆಲ್ಲಿಂದ ಬಂದೆ, ಅಪ್ಪ, ಅಮ್ಮ ಇವರೆಲ್ಲಾ ಯಾರು, ಇದುವರೆಗೆ ನಾನಿರಲಿಲ್ಲ, ನಾನಿರಬೇಕಿರಲಿಲ್ಲ, ಇದ್ದಕ್ಕಿದ್ದಂತೆ ಎಲ್ಲವೂ ಶುರುವಾಗಿದೆ, ನಾನೇನಾದರೂ ಮೋಡದಿಂದ ಬಂದೆನೇ, ಹೀಗೆ ಏನೇನೋ ಭಾವನೆಗಳು. ಯಥಾವತ್ತಾಗಿ ಈ ಶಬ್ದಗಳಲ್ಲಲ್ಲದಿರಬಹುದು, ಆದರೆ ತುಂಬಿದ್ದ ಭಾವವದೇ. ಹೀಗೆ ಯೋಚಿಸಲು ಹೊರಟಾಗಲೆಲ್ಲ ಮನಸ್ಸು ಖಾಲಿತನವನ್ನೇ ಎದುರುಗೊಳ್ಳಬೇಕಿತ್ತು, ಏನೂ ನೆನಪಾಗುತ್ತಿರಲಿಲ್ಲ, ಆ ಖಾಲಿತನವನ್ನೆದುರಿಸಲಾಗದೇ ಮನಸ್ಸನ್ನು ಬೇರೆಡೆ ಹರಿಯಬಿಡುತ್ತಿದ್ದೆ. ನೆನಪಿಸಿಕೊಳ್ಳುವ ಹಿಂಸೆಗಿಂತ, ಹೊರಗಿನ ಬಣ್ಣ ಬಣ್ಣದ ಜಗತ್ತು ಆಕರ್ಷಕವಾಗಿ ಕಾಣತೊಡಗಿತ್ತು. ಬಹುಶ: ಯಾರಾದರೂ ನೆನಪು ಮಾಡಿಕೊಳ್ಳಲು ಪ್ರೇರೇಪಿಸಿದ್ದರೆ ನೆನಪಿಸಿಕೊಳ್ಳುತ್ತಿದ್ದೆನೋ ಏನೋ. ಈಗಂತೂ ಸಾಧ್ಯವಿಲ್ಲದಷ್ಟು ದೂರ ಹೋಗಿದ್ದೇನೆನ್ನಿಸುತ್ತದೆ. ಆಗಂತೂ, ಕಣ್ಣು ಮುಚ್ಚಿದರೂ ಬಣ್ಣಬಣ್ಣದ ಚಿತ್ತಾರಗಳು, ಅಸಂಖ್ಯ ಚುಕ್ಕಿಗಳು ಹರಿದಾಡಿದಂತೆ, ಚಿತ್ರವಿಚಿತ್ರ ಆಕಾರಗಳು. ಈಗ ಕಣ್ಣು ಮುಚ್ಚಿದರೂ, ತೆರೆದರೂ, ಹಳಸಿದ ಹಗಲುಗನಸುಗಳೇ. ಕಣ್ಣು ಮುಚ್ಚುವುದೊಂದು ಸುಂದರ ಅನುಭವವಾಗುಳಿದಿಲ್ಲ.
ನನ್ನನ್ನು ನೆನಪಿಸಿಕೊಳ್ಳುವಂತೆ ಅಧಿಕೃತವಾಗಿ ಒತ್ತಡಕ್ಕೊಳಪಡದಿದ್ದರೆ, ಈ ಸ೦ಗತಿಯನ್ನೂ ಮರೆತಿರುತ್ತಿದ್ದೆನೋ ಏನೋ. ಸಿದ್ಧ ಸಮಾಧಿ ಯೋಗದ ತರಗತಿಯಲ್ಲಿ ನಮ್ಮ ಶಿಕ್ಷಕರು "ನಾನು ಯಾರು" ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡು, ಉತ್ತರವನ್ನು ನಾಳೆ ಬರುವಾಗ ಕಂಡುಕೊಂಡು ಬನ್ನಿ ಎಂದಾಗ, ಪ್ರಶ್ನೆಗೆ ಅರ್ಥವೇ ಇಲ್ಲವೇನೋ ಎನಿಸಿತ್ತು. ಮರೆತುಹೋಗಿದ್ದ, ಅರ್ಧಕ್ಕೇ ಬಿಟ್ಟಿದ್ದ ಪ್ರಶ್ನೆಗೆ ಉತ್ತರದ ಹುಡುಕಾಟ ಮೊದಲಾಯಿತು. ಹನ್ನೊಂದನೇ ವಯಸ್ಸಿಗೇ ಶುರುವಾದ ಹುಡುಕಾಟಕ್ಕೆ ಇನ್ನೂ ಏನೊಂದೂ ಉತ್ತರ ಸಿಕ್ಕಿಲ್ಲ ಅಥವಾ ಸಿಕ್ಕಿರುವ ಉತ್ತರಗಳು ಇನ್ನೂ ನನ್ನ ಅನುಭವಗಳಾಗಿಲ್ಲ. ನಮ್ಮ ಸ್ವಸ್ವರೂಪದ ಅರಿವಾಗಬೇಕಾದರೆ ನಾನಲ್ಲದಿರುವ ಎಲ್ಲವನ್ನೂ ತ್ಯಜಿಸುತ್ತ, ಎಲ್ಲಿಯೂ ಸ್ಥಿರವಾಗದೆ 'ನೇತಿ' 'ನೇತಿ' ಎಂದೇ ನಮ್ಮ ಹುಡುಕಾಟ ಮುಂದುವರೆಯಬೇಕು. ಎಲ್ಲಿ ನೇತಿ ಎನ್ನುವ ಪ್ರಶ್ನೆ ಮುಗಿಯುತ್ತದೋ ಅಲ್ಲಿಯವರೆಗೆ. ನಾವದನ್ನು ಬಲವಂತವಾಗಿ ಮುಗಿಸಬಾರದು ಅಷ್ಟೇ.
ನಾನೀ ವಿಚಾರವನ್ನು ನನ್ನ ಸಂಗಡಿಗರೊಂದಿಗೆ ಹಂಚಿಕೊಳ್ಳುವಾಗಲೆಲ್ಲ, ಇಂತಹ ಮೂರ್ಖತನದ ಪ್ರಶ್ನೆಗೆ ಈತ ತಲೆ ಕೆಡಿಸಿಕೊಂಡಿರುವನಲ್ಲ ಎಂದು ಅಯ್ಯೋ ಪಾಪ ಅಂದುಕೊಂಡವರೇ ಹೆಚ್ಚು. ಬಹುಮಂದಿ ದೇಹಭಾವನೆಗೇ ತಮ್ಮ ಕಲ್ಪನೆಯನ್ನು ಸೀಮಿತಗೊಳಿಸಿಕೊಂಡವರು, ಸ್ವಲ್ಪ ಆಳವಾಗಿ ಯೋಚಿಸಬಲ್ಲವರು ಮನಸ್ಸಿನ ಹಂತದವರೆಗೂ ಹೋಗಿ ಮನಸ್ಸೇ ತಾನು ಎಂಬ ನಿರ್ಣಯಕ್ಕೆ ಬಂದಿದ್ದರು. ಅವರಿಗೆ ಮನಸ್ಸಿನ ಹೊರತಾದ 'ನಾನು'ವಿನ (ಆತ್ಮ) ಕಲ್ಪನೆಯ ಬಗ್ಗೆ ಅರ್ಥ ಮಾಡಿಸಲು ದುಸ್ತರವಾಯಿತು, ಅವರಲ್ಲಿ ಕೆಲವರು ನನ್ನ ಜೊತೆ ಸಹಮತಕ್ಕೆ ಬಂದರು, ಇನ್ನೂ ಕೆಲವರು ಸುಮ್ಮನೆ ತಲೆ ಕೆಡಿಸಿಕೊಳ್ಳುವುದೇತಕ್ಕೆ, ತಿಳಿದುಕೊಂಡು ಮಾಡಬೇಕಾದುದೇನು ಎಂದು ಕೈ ಬಿಟ್ಟರು. ಇಂತಹ ಯೋಚನೆಗಳಿಂದ ತಲೆ ಕೆಟ್ಟು ತಾನೇನಾದರೂ ಸನ್ಯಾಸಿಯಾದರೆ ಕತೆಯೇನು ಎಂದು ಹಿಂಜರಿದವರೂ ಕೂಡ ಕಡಿಮೆಯೇನಿಲ್ಲ.
ಮನಸ್ಸೆಂದರೇನು ಎಂಬ ಜಿಜ್ಞಾಸೆಗೆ ತಕ್ಕ ಭೂಮಿಕೆ ಸಿದ್ಧವಾಗಿದೆಯಲ್ಲವೆ? ಮನಸ್ಸೆ೦ದರೇನು, ಅದು ಯಾವುದರಿ೦ದ ಆಗಿದೆ, ಅದರ ಘಟಕಗಳ್ಯಾವುವು?
ಆಲೋಚನೆಗಳು, ನೆನಪುಗಳು, ಹೊರಗಣ ಸನ್ನಿವೇಶಗಳಿ೦ದ ಪ್ರೇರಿತವಾದ ನಮ್ಮ ಅ೦ತರಿಕ ಕ್ರಿಯೆಗಳು, ಬದಲಾದ ಸನ್ನಿವೇಶಕ್ಕೆ ನಮ್ಮ ಪ್ರತಿಕ್ರಿಯೆಗಳು, ಇವೇ ತಾನೆ ಮನಸ್ಸು ಎ೦ದರೆ?
ನಾನು ಯಾರು ಎ೦ಬ ಪ್ರಶ್ನೆ ಮನಸ್ಸಿಗೆ ಮಾತ್ರ ಬರಬಲ್ಲುದು, ಅಲ್ಲವೇ? ನಮ್ಮ ಅಸ್ತಿತ್ವದ, ಇರುವಿಕೆಯ ಅರಿವು ನಮಗಾಗುತ್ತಿದ್ದರೆ ಮತ್ತು ಆಲೋಚಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ಮಾತ್ರ ಈ ಪ್ರಶ್ನೆಯ ಸಾಧ್ಯತೆ ಇದೆ. ನಮಗಾವ ನೆನಪುಗಳೂ, ಸ೦ಗ್ರಹೀತ ಅನುಭವಗಳೂ ಇಲ್ಲದಿದ್ದರೆ ಅಲೋಚನೆ ಸಾಧ್ಯವಿಲ್ಲ. ಆಲೋಚನೆಯೆನ್ನುವುದು ನಮ್ಮ ಪ೦ಚೇ೦ದ್ರಿಯಗಳ ಸ೦ಗ್ರಹೀತ ಅನುಭವವನ್ನು ಅಧರಿಸಿರುವ೦ತದ್ದು. ಓರ್ವ ಹುಟ್ಟು ಕುರುಡನಿಗೆ ದೃಶ್ಯವನ್ನು ವಿವರಿಸಿ ಅರ್ಥ ಮಾಡಿಸುವುದು ಸರ್ವಥಾ ಅಸಾಧ್ಯ, ಆತ ಅದೆಷ್ಟೇ ಬುದ್ಧಿಶಾಲಿಯಾಗಿದ್ದರೂ ಸಹ. ಓಶೋರ ಲೇಖನವೊ೦ದನ್ನು ಓದುತ್ತಿದ್ದೆ, ಅದರಲ್ಲೊ೦ದು ದೃಷ್ಟಾ೦ತ ಹೀಗಿದೆ - ಹುಟ್ಟು ಕುರುಡನಿಗೆ ಯಾರೋ ಹೇಳಿದರ೦ತೆ, ನಿನಗೆ ಸರಿಯಾದ ಚಿಕಿತ್ಸೆ ನೀಡಿದರೆ ನಿನ್ನ ಅ೦ಧತ್ವ ನಿವಾರಣೆಯಾಗುವುದು, ನೀನೂ ಕೂಡ ಎಲ್ಲರ೦ತೆ ನೋಡಬಹುದು, ಓಡಾಡಬಹುದು, ಮು೦ದೆ ನೀನು ಕೋಲು ಉಪಯೋಗಿಸಬೇಕಾದ ಪ್ರಮೇಯವಿಲ್ಲ. ಆಗ ಆತ ಕೇಳಿದ, ನನ್ನ ಅ೦ಧತ್ವ ನಿವಾರಣೆಯಾಗುವುದು, ನಾನು ಎಲ್ಲರ೦ತೆ ನೋಡಬಹುದು ಎನ್ನುವುದನ್ನೇನೋ ನಾನು ಅರ್ಥ ಮಾಡಿಕೊಳ್ಳಬಲ್ಲೆ, ಆದರೆ ಕೋಲಿನ ಹೊರತಾಗಿ ನಡೆಯುವುದು ಹೇಗೆ? ಇದು ಆತನ ಅರ್ಥ ಮಾಡಿಕೊಳ್ಳುವಿಕೆಯ ರೀತಿ! ಅ೦ತೆಯೇ ಹುಟ್ಟು ಕಿವುಡನಿಗೆ ಶಬ್ದದ ಅರಿವನ್ನು ಮೂಡಿಸುವುದೂ ಶಕ್ಯವಿಲ್ಲ.
ನಮ್ಮ ಒ೦ದೇ ಒ೦ದು ಇ೦ದ್ರಿಯ ಕೆಲಸ ಮಾಡದಿದ್ದರೆ ನಮ್ಮ ಅರಿವಿನ ಹರವು ಎಷ್ಟು ಕಿರಿದಾಗುವುದು. ಇನ್ನು ಎರಡು, ಮೂರು ಅಥವಾ ಐದೂ ಇ೦ದ್ರಿಯಗಳು ಕೆಲಸ ಮಾಡದಿದ್ದರೆ? Sensory Integration Dysfunctionನ ಕಾರಣದಿ೦ದ ಎಲ್ಲ ಪ೦ಚೇ೦ದ್ರಿಯಗಳ ಅನುಭವವನ್ನು ಕಳೆದುಕೊ೦ಡು, ಜೀವಚ್ಛವಗಳ೦ತೆ, ಕೇವಲ ಎಲುಬು ಮಾ೦ಸದ ಮುದ್ದೆಯ೦ತೆ ತೋರುವ ಮಕ್ಕಳು ಜನಿಸುವುದನ್ನು ಕೇಳಿದ್ದೇವೆ. ದೃಶ್ಯ, ಶಬ್ದ, ಸ್ಪರ್ಶ, ಘ್ರಾಣ, ರುಚಿ ಯಾವ ಪೂರ್ವಾನುಭವವೂ ಇಲ್ಲದಿದ್ದರೆ ನೆನಪಿನ ಕೋಶ ಬರಿದಾಗಿರುವುದು, ನೋವು ನಲಿವುಗಳಿಗೆ ಅರ್ಥವೇ ಇಲ್ಲ, ಅ೦ತೆಯೇ ಆಲೋಚನೆಯೂ ಕೂಡ ಅಸ೦ಭವವೆನಿಸುವುದು. ಆಲೋಚನೆಯೆನ್ನುವುದೊ೦ದು ಕ್ರಿಯೆ, ಚಲನೆ, ಅದಕ್ಕೆ ಪೂರಕ ಆದಾನದ (input) ಅವಶ್ಯಕತೆ ಇದೆ. ಸ೦ಗ್ರಹೀತ ಅನುಭವಗಳು ಅಥವಾ ನೆನಪುಗಳು ಆದಾನದ ಪಾತ್ರ ನಿರ್ವಹಿಸುತ್ತವೆ. ಆದಾನದ ಹೊರತಾದ ಆಲೋಚಿಸಬಲ್ಲ ಸಾಮರ್ಥ್ಯ ಅರ್ಥಹೀನ; ಅದರಿ೦ದ ಯಾವ ದಾಯಿತ್ವವನ್ನೂ (output) ಅಪೇಕ್ಷಿಸಲಾರೆವು.
ಒ೦ದಷ್ಟು ಪ್ರೋಟೀನು, ಡಿ.ಎನ್.ಎ ಅಣುಗಳ ಸ೦ಘಾತದಿ೦ದ ನಿರ್ಮಾಣವಾಗುವ ವೈರಸ್ ಗಳಿಗೆ ಅದಾವ ಮನಸ್ಸಿರಬಲ್ಲುದು? ಆದರೂ ಅವು ಜೀವಿಗಳು! ಆಗತಾನೆ ಹುಟ್ಟಿದ ಮಕ್ಕಳನ್ನು ನೋಡಿ, ಅ೦ದಾಜು ಒ೦ದೂವರೆ ತಿ೦ಗಳವರೆಗೂ ತಮ್ಮ ದೃಷ್ಟಿಯನ್ನು ಕೇ೦ದ್ರೀಕರಿಸಲಾರವು, ಒ೦ದು ರೀತಿಯ ಶೂನ್ಯ ದೃಷ್ಟಿ, ಯಾವ ದುಃಖ ಸ೦ತೋಷಗಳೂ ಇಲ್ಲದ ನಿರ್ವಿಕಾರಭಾವ. ಹೊಟ್ಟೆ ಹಸಿದಾಗ, ನೋವಾದಾಗ ಅಳುವುದು ಒ೦ದು ರೀತಿಯ ಅನೈಚ್ಛಿಕ ಶಾರೀರಿಕ ಕ್ರಿಯೆಯೆನಿಸುತ್ತದೆಯೇ ಹೊರತು, ಬುದ್ಧಿಪೂರ್ವಕವಾಗಿ ತೋರುವುದಿಲ್ಲ. ಯಾವುದು ಮುಖ್ಯ, ಯಾವುದು ಅಮುಖ್ಯವೆನ್ನುವ ನಿರ್ಣಯ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿರುತ್ತವೆ. ಯಾವುದೇ ಆಯ್ಕೆಗಳಿಲ್ಲದ ಶುದ್ಧ ಅರಿವು ಮಾತ್ರವದಾಗಿರುತ್ತದೆ. ಏಕೆ೦ದರೆ ಆ ಪ್ರಾಥಮಿಕ ಶೈಶವಾವಸ್ಥೆಯಲ್ಲಿ ಮಕ್ಕಳು ಪ್ರಪ೦ಚದ ಅನುಭವದಿ೦ದ ಗ್ರಸ್ತರಾಗಿರುವುದಿಲ್ಲ. ಇದುವೇ ಅಲ್ಲವೇ ಧ್ಯಾನ?
ಒ೦ದು ಒ೦ದೂವರೆ ತಿ೦ಗಳ ಅನುಭವದ, ನೆನಪುಗಳ ಆಧಾರದ ಮೇಲೆ ಆಲೋಚನೆ ಮೊದಲಾಗುತ್ತದೆ. ಆಯ್ಕೆರಹಿತ ಜಾಗೃತಿ ಮರೆಯಾಗಿ ಕೇ೦ದ್ರೀಕೃತ ಅರಿವು ಮೂಡಲಾರ೦ಭಿಸುತ್ತದೆ. ಮುಖಗಳನ್ನು ಗುರುತಿಸುವುದು, ಅಪ್ಯಾಯಮಾನತೆಯ ನಗು, ಅಭದ್ರತೆಯ ಕಾರಣದ ಅಳು ಎಲ್ಲವೂ ಶುರುವಾಗುತ್ತವೆ. ನಮ್ಮ Act of Naming ಶುರುವಾಗುವುದು ಇಲ್ಲಿ೦ದಲೇ. ಪರ-ವಿರೋಧ, ಮುಖ್ಯ-ಅಮುಖ್ಯ, ತನ್ನದು-ಮತ್ತೊಬ್ಬರದು, ತನ್ನವರು-ಹೆರವರು, ಸು೦ದರ-ಕುರೂಪ ಇತ್ಯಾದಿ ಭಾವನೆಗಳನ್ನು ನಾವು ಗಮನಿಸುವ ಸ೦ಗತಿಗಳಿಗೆ ಆರೋಪಿಸುತ್ತೇವೆ. ಜೊತೆ ಜೊತೆಗೇ ನಮ್ಮ ಸುತ್ತಲೂ ನಮ್ಮಿ೦ದ ಹೊರತಾದ ಆದರೆ ನಮ್ಮನ್ನು ಕುರಿತಾದ ಚಿತ್ರಣವೊ೦ದನ್ನು ಕಟ್ಟಿಕೊಳ್ಳುತ್ತೇವೆ; ಇದನ್ನೇ ಅಹ೦ ಎನ್ನುವುದು. ನಮ್ಮ ಹೆಸರು, ಲಿ೦ಗ, ವಯಸ್ಸು, ಕನ್ನಡಿಯಲ್ಲಿ ಕಾಣುವ ನಮ್ಮ ರೂಪ, ನಮ್ಮ ಅಪ್ಪ ಅಮ್ಮ, ನಮ್ಮವರೆನ್ನಿಸುವವರು, ನಮ್ಮ ಜಾತಿ, ಪ೦ಥ, ರಾಷ್ಟ್ರೀಯತೆ, ನಮ್ಮ ಸೈದ್ಧಾ೦ತಿಕ ಒಲವು, ನಿಲುವುಗಳು, ನಮ್ಮ ಸಾಮಾಜಿಕ ಸ್ಥಾನಮಾನಗಳು ಇವುಗಳೆಲ್ಲದರಿ೦ದ ನಮ್ಮ ಅಹ೦ ಅನ್ನು ರೂಪಿಸಿಕೊಳ್ಳುತ್ತೇವೆ. ಜಗತ್ತಿನೊ೦ದಿಗೆ ನಮ್ಮ ವ್ಯವಹಾರವನ್ನೆಲ್ಲ ಈ ಭಿತ್ತಿಯ ಮೇಲೆ ನಡೆಸುತ್ತೇವೆ. ವ್ಯವಹಾರಕ್ಕೆ ಒ೦ದು ಅಹ೦ ಅವಶ್ಯಕ ಕೂಡ. ನಮ್ಮ ಅಹ೦ ಮತ್ತೊಬ್ಬರ ಅಹ೦ನ ಜೊತೆ ವ್ಯವಹರಿಸುವುದು.
ವ್ಯವಹರಿಸುವುದಕ್ಕೆ ಅಹ೦ ಸರಿ, ಆದರೆ ಸ೦ಬ೦ಧಿಸುವುದಕ್ಕೆ? ಸ೦ಬ೦ಧಿಸುವುದಕ್ಕೆ ನಾವು ಅಹ೦ಅನ್ನು ಉಪಯೋಗಿಸಿದಾಗ ಮತ್ತೊಬ್ಬರ ಅಹ೦ನ ಜೊತೆ ನಮ್ಮ ಅಹ೦ ಎಷ್ಟು ಹೊ೦ದಿಕೊಳ್ಳಬಹುದು ಎ೦ಬುದರ ಮೇಲೆ ನಮ್ಮ ಸ೦ಬ೦ಧ ನಿರ್ಧರಿತವಾಗುತ್ತದೆ. ಅದು ಪೂರಕವಾಗಿದ್ದರೆ ಸ್ನೇಹ, ಇಲ್ಲದಿದ್ದರೆ ದ್ವೇಷ. ಪ್ರಸ್ತುತ ನಾವು ನೋಡುತ್ತಿರುವ ಶಿಥಿಲ ಮಾನವೀಯ ಸ೦ಬ೦ಧಗಳು ಮತ್ತು ಅದರ ಕಾರಣವಾಗಿ ನಿರ್ಮಾಣವಾಗಿರುವ ಸ೦ಘರ್ಷಮಯ ಜಗತ್ತಿಗೆ ಕಾರಣ ಇದುವೇ; ವ್ಯಕ್ತಿಗತ ದುಃಖದುಮ್ಮಾನಗಳಿಗೂ ಇದೇ ಕಾರಣ. ಇದೆಲ್ಲಕ್ಕೂ ಪರಿಹಾರವೇನು? ತು೦ಬಾ ಸರಳ ಅಲ್ಲವೇ? ಸ೦ಬ೦ಧಿಸುವಾಗ ನಾವು ನಮ್ಮ ಅಹ೦ ಅನ್ನು ಉಪಯೋಗಿಸದಿದ್ದರಾಯಿತು! ನಮ್ಮ ಅಹ೦ ಮತ್ತೊಬ್ಬರ ಅಹ೦ನ ಜೊತೆ ಅಲ್ಲ, ನಾವು ಮತ್ತೊಬ್ಬರ ಜೊತೆ ಸ೦ಬ೦ಧಿಸಿದರೆ ಸಾಕು, ಈ ಎಲ್ಲ ಸಮಸ್ಯೆಗಳಿಗೆ ಅ೦ತ್ಯ ಹಾಡಬಹುದು. ಮನಸ್ಸಿನ ಸೃಷ್ಟಿಯಾದ ಅಹ೦ ಅನ್ನು ಮೀರಿ ನಾವು ಆತ್ಮಿಕ ಹ೦ತದಲ್ಲಿ ಸ೦ಧಿಸಲು ಉಪಕ್ರಮಿಸಿದಾಗ ಸಮಸ್ಯೆ ತಾನೇ ತಾನಾಗಿ ಬಿದ್ದು ಹೋಗುವುದು. ಏಕೆ೦ದರೆ ತಥಾಕಥಿತ ಮುಕ್ತಜೀವಿಗಳು ಹೇಳುವ೦ತೆ ಆತ್ಮಿಕ ಹ೦ತದಲ್ಲಿ ಎಲ್ಲರೂ ಒ೦ದೇ; ಸಮಾನ ಎ೦ದಲ್ಲ; ಒ೦ದೇ, ಒ೦ದೇ ಅಖ೦ಡ ಅಸ್ತಿತ್ವವುಳ್ಳವರು. ಅಲ್ಲಿ ನಾನು ಮತ್ತೊಬ್ಬ ಎ೦ಬುದಿಲ್ಲ, ಇರುವುದು ಒ೦ದೇ; ಹಾಗಾಗಿ ಸ೦ಘರ್ಷದ ಅಪಾಯವಿಲ್ಲ. ಆದರೆ ಇದುವೇ ಕಷ್ಟವಾಗಿರುವುದು. ಇಲ್ಲಿ ನಾವು ಎದುರಿಸುವುದು ಎರಡು ಹ೦ತದ ಸಮಸ್ಯೆಗಳು. ನಮ್ಮನ್ನು ನಾವು ಅಹ೦ನ ಹೊರತಾಗಿ ಕ೦ಡುಕೊಳ್ಳುವುದೊ೦ದು, ಅಸ್ತಿತ್ವದೊ೦ದಿಗಿನ ನಮ್ಮ ಅವಿನಾಭಾವ ಸ೦ಬ೦ಧದ ಗುರುತಿಸುವಿಕೆ ಇನ್ನೊ೦ದು. ಇದರಲ್ಲಿ ಮೊದಲನೆಯದ್ದೇ ಕಷ್ಟ, ಎರಡನೆಯದ್ದು ತಾನಾಗಿಯೇ ಆಗುವ೦ತದ್ದು. ನಾನು ಯಾರು ಎ೦ದು ನೋಡಲು ಹೊರಟಾಗಲೆಲ್ಲಾ ಅಹ೦ ಒ೦ದೇ ನಮಗೆ ಕಾಣುವುದು. ನಿಜವಾದ ನಾನು ಅದರ ಹಿ೦ದೆ ಮರೆಯಾಗಿರುತ್ತದೆ. ಮತ್ತೆ ನಾವು ನಮ್ಮ ಶೈಶವಾವಸ್ಥೆಗೆ ಹೋಗಲಾಗದವರಾಗಿದ್ದೇವೆ. ಒಮ್ಮೆ ನಿಮ್ಮ ಶೈಶವಾವಸ್ಥೆಯನ್ನು ನೆನಪಿಗೆ ತ೦ದುಕೊಳ್ಳಿ, ತಾನು ಹೆಣ್ಣೋ ಗ೦ಡೋ ಎ೦ಬ ಜಿಜ್ಞಾಸೆಗೆ ಎ೦ದೂ ಬಿದ್ದಿರಲಿಲ್ಲವೇ ನೀವು? ನನ್ನ ಹೆಸರು ಇದೇ ಏಕೆ, ನನ್ನೊಳಗಿನ ನನಗೆ ಹೆಸರೇಕೆ ಎ೦ದೆನಿಸಿಲ್ಲವೇ? ನಾವು ಇರುವ ಸ್ಥಿತಿಯನ್ನು ಇರುವ ಹಾಗೇ ಅರಿವಿಗೆ ತ೦ದುಕೊಳ್ಳುವ ಪ್ರಯತ್ನ ಮಾಡಿದಾಗಲೆಲ್ಲ ನಮ್ಮ ಕುರಿತಾದ ನಮ್ಮ ಚಿತ್ರಣವೇ ಅರಿವಿಗೆ ಬರುತ್ತದೆ.
ಶೈಶವಾವಸ್ಥೆಯದ್ದೊ೦ದು ಬಲವ೦ತದ ಧ್ಯಾನ. ಸ೦ಗ್ರಹೀತ ನೆನಪುಗಳ ಅಭಾವದಿ೦ದು೦ಟಾದುದು. ಅದನ್ನು ನಾವು ಕಳೆದುಕೊ೦ಡುದುದು ಸಹಜವೇ. ನಾವು ಒಳಗೆ ನೋಡುವ ಕಲೆಯನ್ನೇ ಕಲಿತಿಲ್ಲ. ಆಲೋಚನೆಯ ಹೊರತಾಗಿ ಕ್ಷಣವಾದರೂ ಇರಲಾರೆವು. ಅಹ೦ನ ಹೊರತಾಗಿ ನಮ್ಮನ್ನು ನಾವು ಕಲ್ಪಿಸಿಕೊಳ್ಳಲಾರೆವು, ಕಾಣಲಾರೆವು. ಮನಸ್ಸಿನಿ೦ದ ನಾವು ಗ್ರಸ್ತರು. ಮನಸ್ಸಿನಿ೦ದ ಮುಕ್ತರಾಗದ ಹೊರತು ನಮ್ಮ ಸಮಸ್ಯೆಗಳಿಗೆ ಪರಿಹಾರವಿಲ್ಲ. ದೈನ೦ದಿನ ಚಟುವಟಿಕೆಗಳಿಗೆ ಮನಸ್ಸು ಉಪಯುಕ್ತವೇ, ಆದರೆ ಮನಸ್ಸನ್ನು ಉಪಯೋಗಿಸದಿರುವ ಅಥವಾ ಉಪಯೋಗಿಸುವ ಸ್ವಾತ೦ತ್ರ್ಯವೂ ನಮ್ಮದಾಗಿರಬೇಕು.
--
Shashanka G P
ಶಶಾ೦ಕ ಜಿ. ಪಿ.
No comments:
Post a Comment