ಅದು ಅವತ್ತು ಕೊಪ್ಪಕ್ಕೆ ಹೋಗಿ ಬಂದ ನಂತರದ ದಿನ.. ಸುಮ್ಮನೆ ಬೆಳಿಗ್ಗೆ ಹೀಗೇ wish ಮಾಡುವಾಗ ಹೇಳಿದ್ದೆ ಜೋಷಿಯವರಿಗೆ trekkingಗೆ ಹೋಗಿದ್ದೆ ಚೆನ್ನಾಗಿತ್ತು ಅಂತ.. ಅವರು ಲೋಕಾರೂಢಿಯಾಗಿ ಆಡಿದ್ದರು.. trekking ಒಳ್ಳೆಯ ಹವ್ಯಾಸ.. ರತ್ನಗಿರಿಗೆ ಹೋಗಿದ್ದೀಯ?.. ಒಳ್ಳೆ ಹೇಳಿಮಾಡಿಸಿದ ಜಾಗ ಅದು ಅದಕ್ಕೆ ಅಂತ... ಈ ಮಾತುಗಳ ಸುಮಾರು ಎರಡು ತಿಂಗಳುಗಳ ಬಳಿಕ, ಕವಿತಾಳು ತನ್ನ wedding anniversaryಯ ಸಿಹಿ ಹಂಚುವ ಸಂದರ್ಭದಲ್ಲಿ ಹೇಳಿದರು ಅವರು, ಹೇ ಕೊಡಚಾದ್ರಿಗೆ ಟ್ರೆಕ್ಕಿಂಗ್ ಹೋಗೊ ಪ್ಲಾನಿದೆ.. ಟೆಂತ್ ಫ್ಲೋರಲ್ಲಿ ರವಿ ಅಂತ ಇದಾನೆ .. ಫೋನ್ ಮಾಡಿ ಹೇಳು ನೀ ಬರೋದಾದ್ರೆ .. ನಾನು ಆಗಲಿ ಎಂದು ಸುಮ್ಮನಾಗಿದ್ದೆ ಕಾಫೀ ಸುರುವುತ್ತ... ಇದಾಗಿತ್ತು ನಾನು 'ಹೆಜ್ಜೆ-೧' ರೊಂದಿಗೆ ಚಾರಣಕ್ಕೆ ಹೋಗಲು ಪೀಠಿಕೆ... ಮು೦ದೆ ಓದಿ...
No comments:
Post a Comment